Pages

Thursday, February 9, 2012

ಇಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ


ಸಮಾಜದ ಕಣ್ಣಿಗೆ ಗೇಲಿಯ ವಸ್ತುವಾಗಿ ಕಾಣುವ ಮಂಗಳಮುಖಿಯರೆ ಈಗ ಸಾವ೯ಜನಿಕರಿಗಾಗಿ ತಮ್ಮ ಭಿಕ್ಷೆಯ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನ ನಿಮಿ೯ಸಿದ್ದಾರೆ.
ತುಮಕೂರಿನ ಶೆಟ್ಟಿಹಳ್ಳಿಯ ಕಾಲೋನಿಯಲ್ಲಿ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಮಂಗಳಮುಖಿಯರು ದೇವಸ್ಥಾನ ನಿಮಿ೯ಸಿದ್ದಾರೆ. ಈ ದೇವಸ್ಥಾನಕ್ಕೆ ಕೇವಲ ಮಂಗಳಮುಖಿಯರಷ್ಟೆ ಅಲ್ಲಾ ಎಲ್ಲಾ ಸಾವ೯ಜನಿಕರಿಗೂ ಪ್ರವೇಶವಿದೆ.
ಪದವೀಧರರು.....
ಮೂಲತಃ ಪಾವಗಡದವರಾದ ಸಾಹಿತ್ಯದಲ್ಲಿ ಪದವಿ ಪಡೆದಿರುವ ದೀಪಿಕಾ ಎಂಬುವರು ತುಮಕೂರಿನಲ್ಲಿರುವ ಇತರೆ 38 ಮಂದಿ ಮಂಗಳಮುಖಿಯರೊಂದಿಗೆ ಜತೆಗೂಡಿ ಭಿಕ್ಷೆಯ ಹಣದಲ್ಲಿ ಒಂದಷ್ಟು ಭಾಗ ಉಳಿಸಿ ರೇಣುಕ ಎಲ್ಲಮ್ಮ ದೇವಸ್ಥಾನ ನಿಮಿ೯ಸಿದ್ದಾರೆ.
ಮಂಗಳವಾರ ಪೂಜೆ....
ಪ್ರತಿ ಮಂಗಳವಾರ ಈ ರೇಣುಕ ಎಲ್ಲಮ್ಮನಿಗೆ ವಿಶೇಷ ಪೂಜೆ ಮಾಡಲಾಗುವುದು. ಈ ಪೂಜೆ ಮಾಡುವವರು ಸಾಹಿತ್ಯದಲ್ಲಿ ಪದವಿ ಪಡೆದಿರುವ ಸ್ವತಃ ಮಂಗಳಮುಖಿಯಾಗಿರುವ ದೀಪಿಕಾ. ಪ್ರತಿ ವಾರ ಕನಿಷ್ಟ 100 ಕ್ಕೂ ಹೆಚ್ಚು ಮಂದಿ ಪೂಜೆಗೆ ಬರುತ್ತಾರೆ.
ಯಾರ್ಯಾರು ಇದ್ದಾರೆ....

ತುಮಕೂರಿನ ಶೆಟ್ಟಿಹಳ್ಳಿಯ ಕಾಲೋನಿಯಲ್ಲಿ ದೀಪಿಕಾ, ತಮಿಳುನಾಡಿನ ತ್ರಿಶಾ, ಬಳ್ಳಾರಿಯ ಝಾನ್ಸಿ, ಚಿಕ್ಕಬಳ್ಳಾಪುರದ ನಂದಿನಿ, ಪಾವಗಡದ ಪೖಥ್ವಿ ಹಾಗೂ ವಿಜಯಪುರದ ಇಂದು ಇದ್ದಾರೆ. ಇವರ ವೖತ್ತಿ ಕೂಡ ಭಿಕ್ಷೆ ಎತ್ತುವುದು. ಇವರಲ್ಲದೆ ತುಮಕೂರಿನಲ್ಲಿರುವ ಉಳಿದ 40 ಕ್ಕೂ ಹೆಚ್ಚು ಮಂಗಳಮುಖಿಯರು ದೇವಸ್ಥಾನ ನಿಮಾ೯ಣಕ್ಕೆ ತಮ್ಮ ಉಳಿತಾಯದ ಹಣ ನೀಡುತ್ತಾ ಬಂದಿದ್ದಾರೆ.
ಮೂತಿ೯ ಕೆತ್ತಿದ್ದು ಎಲ್ಲಿ.....
ಅತ್ಯಂತ ಆಕಷ೯ಕವಾಗಿರುವ ಈ ರೇಣುಕ ಯಲ್ಲಮ್ಮ ಮೂತಿ೯ಯನ್ನು ಕೋಲಾರ ಬಳಿಯ ಸಿರಿವರ ಪಟ್ಟಣದಲ್ಲಿ ಕೆತ್ತಿಸಲಾಗಿದೆ. ಪ್ರತಿ ಮಂಗಳವಾರ ಸ್ವತಃ ದೀಪಿಕಾ ಅವರೇ ಎಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಗ ಕನಿಷ್ಟ 100 ಕ್ಕೂ ಹೆಚ್ಚು ಮಂದಿ ಪೂಜೆಗೆ ಆಗಮಿಸುತ್ತಾರೆ.
ಸುಲಭವಲ್ಲ....
ದೇವಸ್ಥಾನಕ್ಕೆಂದು ಕಳೆದ ಐದು ವಷ೯ಗಳ ಹಿಂದೆಯೇ ಶೆಟ್ಟಿಹಳ್ಳಿ ಕಾಲೋನಿಯಲ್ಲಿ ಜಾಗ ಖರೀದಿಸಿದ್ದರು. ಭಿಕ್ಷೆಯಲ್ಲಿ ಉಳಿತಾಯ ಮಾಡಿದ ಹಣದಲ್ಲೇ ಜಾಗ ಖರೀದಿಸಿದ್ದರು. ಆದರೆ ಇಲ್ಲಿ ದೇವಸ್ಥಾನ ನಿಮಿ೯ಸುವ ಸುದ್ದಿ ಹಬ್ಬುತ್ತಿದ್ದಂತೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ಕಾನೂನಿನ ತೊಡಕುಗಳ ಬಗ್ಗೆ ಬೆದರಿಕೆ ಹಾಕಿದರು. ಆದರೆ ಕೆಲವು ಎಲ್ಲಮ್ಮ ಭಕ್ತರು ಹಾಗೂ ಒಂದಿಬ್ಬರು ರಾಜಕೀಯ ಮುಖಂಡರು ಇವರ ನೆರವಿಗೆ ಧಾವಿಸಿದರು.
ಹೊರ ಊರುಗಳಿಂದಲೂ ಭಿಕ್ಷೆ....
ಭಿಕ್ಷೆಯಲ್ಲಿ ಉಳಿತಾಯವಾದ ಹಣದಲ್ಲಿ ದೇವಸ್ಥಾನ ನಿಮಾ೯ಣಕ್ಕೇನೋ ಕೈ ಹಾಕಲಾಯಿತು. ಆದರೆ ತೀವ್ರ ಹಣದ ಅಡಚಣೆಯಿಂದ ದೇವಸ್ಥಾನದ ನಿಮಾ೯ಣ ನಿಧಾನಗತಿಯಲ್ಲಿ ಸಾಗಿತು. ಆಗ ಈ ಮಂಗಳಮುಖಿಯರು ತುಮಕೂರು ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಕೊರಟಗೆರೆ, ಮಧುಗಿರಿ, ಕಡೂರು, ಹಾಸನ, ಬೀರೂರು, ಮುಂತಾದ ಕಡೆಗೂ ಭಿಕ್ಷಾಟನೆಗೆ ಹೋಗಿ ಹಣ ಉಳಿಸಿದರು.
ಖಚು೯ ಎಷ್ಟಿದೆ...
34 ಅಡಿ ಅಗಲ ಮತ್ತು 52 ಅಡಿ ಉದ್ದವುಳ್ಳ ಈ ಜಾಗ ಮತ್ತು ದೇವಸ್ಥಾನದ ನಿಮಾ೯ಣಕ್ಕೆ ಈಗಾಗಲೇ 10 ಲಕ್ಷ ರು. ವ್ಯಯವಾಗಿದೆ. ರಾಜಗೋಪುರ ನಿಮಿ೯ಸುವ ಇರಾದೆ ಕೂಡ ಇದೆ.
ಅನಾಥ ಮಕ್ಕಳು...
ಸ್ವತಃ ಪದವೀಧರರು ಆಗಿರುವ ದೀಪಿಕಾ ಅವರ ಮುಂದಿನ ಯೋಜನೆ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಕೊಡಿಸುವುದಂತೆ. ಒಟ್ಟಾರೆಯಾಗಿ ಜನರ ಕಣ್ಣಲ್ಲಿ ಗೇಲಿಯ ವಸ್ತುವಾಗಿ ಕಾಣುವ ಈ ಮಂಗಳಮುಖಿಯರು ಈಗ ಸಾಥ೯ಕ ಕೆಲಸದತ್ತ ಹೆಜ್ಜೆ ಹಾಕಿದ್ದಾರೆ.


Sunday, February 5, 2012

ಈ ಪೊಲೀಸ್ ಠಾಣೆಗೆ ಲಾಕಪ್ಪೇ ಇಲ್ಲ!



ಶೌಚಾಲಯವೂ ಇಲ್ಲ, ಜೀವ ಬಿಗಿ ಹಿಡಿದು ಕೆಲಸ ಮಾಡುತ್ತಿದ್ದಾರೆ ಪೊಲೀಸರು
ಪೊಲೀಸ್ ಸಪ೯ಗಾವಲಿನ ಮಧ್ಯೆಯೇ ಕಳ್ಳರು ಚಳ್ಳೆಹಣ್ಣೆ ತಿನ್ನಿಸಿ ಪರಾರಿಯಾಗುವ ಈ ಹೊತ್ತಲ್ಲಿ ಲಾಕಪ್ಪೇ ಇಲ್ಲದ ಪೊಲೀಸ್ ಠಾಣೆ ಇದೆ ಎಂಬುದನ್ನು ನಂಬುತ್ತೀರ?
ಬೆಂಗಳೂರಿನ ಭವಿಷ್ಯನ ಉಪನಗರಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಯಾಸ್ಮಿನ್್ಭಟ್ಕಳ್್ ಕೆಲ ಕಾಲ ತಂಗಿದ್ದ ಎಂಬ ಶಂಕೆ ಇರುವ ತುಮಕೂರಿನಲ್ಲೇ ಪೊಲೀಸ್್ ಠಾಣೆಗೆ ಲಾಕಪ್್ ಇಲ್ಲವೆಂದರೆ ಆಶ್ಚಯ೯ವಾದೀತೆ.
ಇದು ನಿಜ. ತುಮಕೂರು ನಗರದ ಮಧ್ಯ ಭಾಗದಲ್ಲಿರುವ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲೇ ಲಾಕಪ್ ಇಲ್ಲ. ಈ ಮೂಲಕ ಪೊಲೀಸ್ ಠಾಣೆಯೊಂದು ರಾಜ್ಯಡಳಿತ, ವ್ಯವಸ್ಥೆಯ ನಿಲ೯ಕ್ಷತೆ, ಉದಾಸೀನ, ತಾತ್ಸಾರ, ಅಸಡ್ಡೆ, ಬೇಜವಾಬ್ದಾರಿತನಕ್ಕೆ ಬಲಿಯಾಗಿದೆ.
ಸಾಮಾನ್ಯವಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಸೆಲ್್ಗಳು ಇರುತ್ತವೆ. ಪುರುಷರಿಗೊಂದು, ಮಹಿಳೆಯರಿಗೊಂದು. ಆದರೆ ಇಡೀ ದೇಶದಲ್ಲೇ ಲಾಕಪ್ಪೇ ಇಲ್ಲದ ಪೊಲೀಸ್ ಠಾಣೆ ಎಂಬ ಕುಖ್ಯಾತಿಗೆ ತಿಲಕ್ ಪಾಕ್೯ ಪೊಲೀಸ್ ಸ್ಟೇಷನ್ ಪಾತ್ರವಾಗಿದೆ.
ಕೆಲಸಕ್ಕೆ ಬಾರದ ಬಂದೂಕುಗಳು...
ಈ ಠಾಣೆಯಲ್ಲಿರುವ ಬಂದೂಕುಗಳು, ವೈರ್್ಲೆಸ್್ಗಳು ಅಸುರಕ್ಷತೆಗೆ ತುತ್ತಾಗಿವೆ. ಇಡೀ ಕಟ್ಟಡವೇ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ವಿದ್ಯುತ್್ ಗ್ರೌಂಡ್್ ಆಗಿ ಸಿಬ್ಬಂದಿಗಳು ಅಧಿಕಾರಿಗಳು ತೊಂದರೆಗೆ ಸಿಲುವಂತಹ ಪರಿಸ್ಥಿತಿ ನಿಮಾ೯ಣವಾಗಿದೆ.
ಶೌಚಾಲಯವಿಲ್ಲ.....
ಮಹಿಳಾ ಪೊಲೀಸರು, ಇಬ್ಬರು ಎಸ್್ಐಗಳಿರುವ ಈ ಠಾಣಾ ಕಚೇರಿಯೊಳಗೆ ಶೌಚಾಲಯವೇ ಇಲ್ಲ. ನೀರಿನ ಸಂಪಕ೯ವಂತೂ ಇಲ್ಲವೇ ಇಲ್ಲ. ಈ ಠಾಣೆ ನಿರಂತರವಾಗಿ ಸೋರುತ್ತಿರುವುದರಿಂದ ವಿದ್ಯುತ್್ ಗ್ರೌಂಡ್್ ಆಗುವುದು ಸಾಮಾನ್ಯ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಠಾಣೆ ಸೋರುವುದರಿಂದ ಇರುವ ಎರಡು ಕಂಪ್ಯೂಟರ್್ಗಳೂ ಕೆಟ್ಟು ಹೋಗಿವೆ. ಈ ಠಾಣೆ ಪಕ್ಕದಲ್ಲಿರುವ ಉಪ-ಆರಕ್ಷಕ ನಿರೀಕ್ಷಕರ ವಾಸದ ಮನೆ ಸ್ಥಿತಿ ಮತ್ತೂ ಶೋಚನೀಯ.
ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಯಾವುದೇ ಮೂಲ ಸೌಕಯ೯ವೂ ಇಲ್ಲದ ಈ ಪೊಲೀಸ್್ ಠಾಣೆಯನ್ನು ಕನಾ೯ಟಕ ಗೖಹ ಮಂಡಳಿ 1977 ರಲ್ಲಿ ನಿಮಿ೯ಸಿದ್ದು ಒಂದು ವಾಸದೆ ಮನೆಯಲ್ಲಿದೆ. ಲಾಕಪ್ಪೇ ಇಲ್ಲದ ಪೊಲೀಸ್್ ಠಾಣೆ ಬಗ್ಗೆ ಗಮನಸೆಳೆದಿರುವ ಮಾನವ ಹಕ್ಕುಗಳ ಹೋರಾಟಗಾರ ಸಿದ್ಧಲಿಂಗೇಗೌಡ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

Tuesday, January 31, 2012

ದಲಿತರ ಸಂಕಟ ಅನಾವರಣಗೊಳಿಸಿದ `ಮಣೆಗಾರ'


ದಲಿತ ಆತ್ಮಕಥೆಗಳು ಅಂದ ಕೂಡಲೇ ಮರಾಠಿ ಭಾಷೆಯತ್ತ ಬೊಟ್ಟು ತೋರುತ್ತಿದ್ದ ಹೊತ್ತಲ್ಲಿ ಕನ್ನಡದಲ್ಲೂ ಸತ್ವಶಾಲಿ ದಲಿತ ಆತ್ಮಕಥೆಗಳು ಬಂದಿರುವುದು ಇತಿಹಾಸ. ಈಗ ತುಂಬಾಡಿ ರಾಮಯ್ಯ ನವರ `ಮಣೆಗಾರ' ನಾಟಕವನ್ನು ರಂಗಕ್ಕೆ ಅಳವಡಿಸಿದ್ದು ಮಾದಿಗ ಜನಾಂಗದ ಹಸಿವು, ಬಡತನ, ಅಪಮಾನಗಳನ್ನು ರಂಗಕೖತಿಯಲ್ಲಿ ಅನಾವರಣಗೊಳಿಸಲಾಗಿದೆ.
ಇಡೀ ಆತ್ಮಕಥೆ ಆ ಮೂಲಕ ರಂಗ ಪ್ರಯೋಗ ತಣ್ಣಗೆ ಸಾಗುತ್ತದೆ. ರಂಗಕೖತಿಯಲ್ಲಿ ಬಡತನಕ್ಕಿಂತ ಹಸಿವು ಹೆಚ್ಚು ಧ್ವನಿಪೂಣ೯ವಾಗಿ ಕಾಣಿಸಲಾಗಿದೆ. ಇದು ಕೖತಿಯ ಶಕ್ತಿಯು ಹೌದು, ರಂಗ ನಿದೇ೯ಶಕರ ಶಕ್ತಿ ಕೂಡ.
ಇಡೀ ಪ್ರಯೋಗದಲ್ಲಿ ಸಾಗರದ ಅಲೆಯಂತೆ ಮನುಷ್ಯ ಪ್ರೀತಿ ಎಂಬುವುದು ಹರಿದಾಡಿದೆ. ಅನ್ನಕ್ಕಾಗಿ ಬೇಡುವುದು, ಕೀಳು ಜಾತಿ ಎಂದು ಹೀಯಾಳಿಸುವುದು, ದಲಿತ ಲೋಕದಲ್ಲಿನ ಬಡತನ, ದಲಿತೇತರ ಭಂಡತನಗಳನ್ನು ಎಲ್ಲೂ ದ್ವೇಷ, ಪ್ರತೀಕಾರದ ರೀತಿಯಲ್ಲಿ ಚಿತ್ರಿಸಿಲ್ಲ. ಎಲ್ಲವನ್ನು ನದಿ ನೀರಿನಂತೆ ಹರಿ ಬಿಡಲಾಗಿದೆ. ಹಾಗಾಗಿ ಈ ಕೖತಿ ಏಕಕಾಲದಲ್ಲಿ ದಲಿತರ ಸಂಕಟದ ಅನಾವರಣ ಮಾಡುವುದರ ಜತೆಗೆ ನಮ್ಮೆಲ್ಲರ ಪಾಪ ಪ್ರಜ್ಞೆಯನ್ನು ಗೋಚರಿಸುವಂತೆ ಮಾಡುತ್ತದೆ.
ಕೆಲಸದ ಸಲುವಾಗಿ ಕೖತಿಕಾರ ತುಂಬಾಡಿ ರಾಮಯ್ಯ ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟಾಗ ಎದುರಿಸುವ ಅಸ್ಪೖಶ್ಯತೆ, ಅದರಿಂದ ಆಗುವ ಮುಜುಗರವನ್ನು ರಂಗಕೖತಿಯಲ್ಲಿ ಪರಿಣಾಮಕಾರಿಯಾಗಿ ಕಾಣಿಸಲಾಗಿದೆ. ಆತ್ಮಕಥೆಗಳು ಅಂದ ಕೂಡಲೇ ಒಂದಷ್ಟು ರಂಜನೆ ಇದ್ದೇ ಇರುತ್ತದೆ ಎಂಬುದು ರೂಢಿ. ಆದರೆ ಮಣೆಗಾರದಲ್ಲಿ ಈ ಅಂಶ ಇದ್ದರೂ ಅದು ಹಾಸ್ಯದ ಸರಕಾಗದೆ ನಮ್ಮ ಅಂತಃಕರಣವನ್ನು ತಟ್ಟಿ ಬಿಡುತ್ತದೆ.
ಸಕಾ೯ರದ ರಕ್ಷಣೆ ಇಲ್ಲದಿರುವುದರಿಂದ ದಲಿತರ ಹತ್ಯೆಗಳು, ಅಟ್ರಾಸಿಟಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವ ಹೊತ್ತಲ್ಲಿ `ಮಣೆಗಾರ' ರಂಗಕೖತಿ ಒಂದು ರೀತಿಯಲ್ಲಿ ಪ್ರತಿಭಟನೆಯ ಅಸ್ತ್ರವಾಗುತ್ತದೆ. ನಗುವಿನ ಹಿಂದಿನ ಅಸಹಾಯಕತೆ, ಬೇಡಿ ತಿನ್ನುವ ಹಿಂದಿನ ಹಸಿವು, ಇವೆಲ್ಲಾ ದಾಟಿ ಬಂದರೆ ದುತ್ತೆಂದು ನುಗ್ಗುವ ಅಸ್ಪೖಶ್ಯತೆ ನೋಡುಗರ ಅಂತಃಕರಣವನ್ನು ತಟ್ಟಿ ಬಿಡುತ್ತದೆ.
ಇನ್ನು ನಟರಂತೂ ಅಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದಕ್ಕಿಂತ ಅಲ್ಲಿ ಬದುಕಿದ್ದಾರೆ ಅನ್ನುವಷ್ಟು ಸಹಜವಾಗಿ ಅಲ್ಲಿನ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ನಾಟಕವನ್ನು ಎಲ್ಲೂ ವಾಚ್ಯಗೊಳಿಸದೆ, ಕ್ಲೀಷೆಗೊಳಿಸದೆ ಯಥಾವತ್ತಾಗಿ ಅನಾವರಣಗೊಳಿಸಲಾಗಿದೆ.
ಕೆ.ಬಿ. ಸಿದ್ದಯ್ಯನವರ ಹಾಡುಗಳನ್ನು ಪ್ರಯೋಗದಲ್ಲಿ ಬಳಸಿದ್ದು ಅದು ಕೂಡ ನಾಟಕದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ರಂಗ ಸಜ್ಜಿಕೆಯಿಲ್ಲದೆ, ಆಪ್ತ ರಂಗಭೂಮಿಯಲ್ಲಿ ಈ ನಾಡಿನ ದಲಿತರ ಅದರಲ್ಲೂ ಎಡಗೈ ಜನಾಂಗದವರ ಸಂಕಟ, ಹಸಿವನ್ನು ತಣ್ಣಗೆ ಅನಾವರಣಗೊಳಿಸಿದ್ದಾರೆ. ನಮ್ಮೆಷ್ಟೆತ್ತರದ ಬಾಚಣಿಗೆಯನ್ನು ಸಂಕೇತವಾಗಿ ರಂಗಪ್ರಯೋಗದಲ್ಲಿ ಬಳಸಲಾಗಿದೆ. ರಂಗದಲ್ಲಿ ನೋಡುವಾಗ ಹಾಸ್ಯಕ್ಕೆ ಒತ್ತು ಕೊಡಲಾಗಿದೆ ಎಂದು ಅನಿಸಿದರೂ ಪ್ರಯೋಗದಿಂದ ಹೊರ ಬಂದಾಗ ನಮ್ಮನ್ನು ತಣ್ಣಗೆ ಮಣೆಗಾರ ಆವರಿಸಿಕೊಳ್ಳುತ್ತೆ. ಜತೆಗೆ ಅರಿವಿನ ಕಡೆ ಹೋಗಲು ಸಜ್ಜುಗೊಳಿಸುತ್ತದೆ.



Wednesday, December 21, 2011

ಮಡೆಸ್ನಾನ-ವಂಚನೆ ಹೆಸರಲ್ಲಿ ಧಾಮಿ೯ಕ ಆಚರಣೆ ಎಷ್ಟು ಸರಿ!

ಮಡೆಸ್ನಾನ ಸುದ್ದಿಯಲ್ಲಿದೆ. ಆ ಮೂಲಕ ಕುಕ್ಕೆ ಸುಬ್ರಹ್ಮಣ್ಯವೂ ಸುದ್ದಿಯಲ್ಲಿದೆ. ಈಗ ಮಡೆ ಸ್ನಾನದ ಸನ್ನಿ ಹಿಡಿದಿದೆ. ಚಿಕ್ಕಬಳ್ಳಾಪುರದಲ್ಲಿ ಮಡೆ ಸ್ನಾನ ನಡೆದಿದೆ, ಉಡುಪಿಯಲ್ಲೂ ನಡೆದಿದೆ. ಪಾವಗಡದ ನಾಗಲಮಡಿಕೆಯಲ್ಲೂ ನಡೆದಿದೆ.
ಮದುವೆಯೋ, ನಾಮಕರಣದ ಪಂಕ್ತಿ ಊಟದಲ್ಲಿ ಊಟದ ಎಲೆಯ ಮುಂದೆ ಸಾಂಬರ್್ ಬಿದ್ದರೆ ಅಸಹ್ಯ ಪಟ್ಟುಕೊಳ್ಳುವ ನಾವು ಎಂಜಲೆಲೆ ಮೇಲೆ ಉರುಳಾಡುವುದನ್ನು ಹೇಗೆ ಸಹಿಸಿಕೊಳ್ಳುವುದು. ಇದೊಂದು ಮೌಢ್ಯ ಮತ್ತು ಅಮಾನವೀಯ ಆಚರಣೆ.
ಎಂಜಲೆಲೆ ಮೇಲೆ ಉರುಳಾಡಬೇಕು ಅಂತಾ ಯಾವುದೇ ಧಮ೯ಶಾಸ್ತ್ರವೂ ಹೇಳಿಲ್ಲ. ಮಡೆಸ್ನಾನದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಆದರೂ ಯಜಮಾನ ಸಂಸ್ಕೖತಿಯ ವಿಕೖತ ರೂಪವಾಗಿ ಈ ಮಡೆಸ್ನಾನ ಎಂಬ ಅಮಾನವೀಯ ಆಚರಣೆ ಇನ್ನೂ ಜಾರಿಯಲ್ಲಿರುವುದು ಅತ್ಯಂತ ಅಸಹ್ಯಕರ.
ಮೇಲ್ವಗ೯ದ ಯಜಮಾನಿಕೆ, ಕೆಳವಗ೯ದವರ ಅಸಹಾಯಕತೆಯ ಜೊತೆಗೆ ಜನರ ಭಾವನೆಗಳನ್ನು ಲಾಭದ ಮೂಲವನ್ನಾಗಿ ಮಾಡಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯವರ (ಅ)ನೀತಿಯಿಂದಾಗಿ `ಮಡೆಸ್ನಾನ' ಎಂಬ ಅಮಾನವೀಯ ಆಚರಣೆ ತನ್ನ ಬೇರುಗಳನ್ನು ಊರಲು ತೊಡಗಿದೆ.
ವಾಸ್ತವವಾಗಿ ಮಡೆಸ್ನಾನ ಎಂಬುದೇ ವಿದ್ಯುಕ್ತವಾದ ಪೂಜಾ ವಿಧಿಯಲ್ಲ. ಇಷ್ಟಾದರೂ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಈ ಮಡಸ್ನಾನವನ್ನು ಪ್ರೋತ್ಸಾಹಿಸುತ್ತಿದೆ. ಆಡಳಿತ ಮಂಡಳಿಗೆ ಕೖಪಾಪೋಷಣೆಗಾಗಿ ಸಕಾ೯ರವೇ ನಿಂತಿದೆ. ಮಲೆಕುಡಿಯರು ಮಾತ್ರ ಎಂಜಲೆಲೆ ಮೇಲೆ ಉರುಳಾಡುತ್ತಿದ್ದಾರೆ. ಈ ಅಮಾನವೀಯ ಆಚರಣೆ ವಿರುದ್ಧ ಮಾತನಾಡಲು ಬಂದವರಿಗೆ ಒದೆ ಬೀಳುತ್ತಿದೆ. ದೈವದ ಹೆಸರಿನಲ್ಲೇ ಈಗ ಅಸ್ಪೖಶ್ಯತೆ ನಡೆಯುತ್ತಿದೆ. ಹಿಂಸೆಯೂ ನಡೆಯುತ್ತಿದೆ.
ಬ್ರಾಹ್ಮಣರ ಎಂಜಲೆಲೆ ಮೇಲೆ ಉರುಳಾಡುವುದರಿಂದ ಯಾವುದೇ ಲಾಭವಿಲ್ಲವೆಂದು ಹೇಳಬೇಕಿದೆ. ದೇವಳದ ಆಡಳಿತ ಮಂಡಳಿ ಹೇಳಬೇಕು. ಆದರೆ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೂ. ಅಲ್ಲದೇ ಇತ್ತೀಚಿನ ಲೇಖಕರು ಕೂಡ ಈ ರೀತಿಯ ಯಾವುದೇ ಅಮಾನವೀಯ ಆಚರಣೆ ವಿರುದ್ಧ ಸಿಡಿದೆದ್ದಿದ್ದಾರೆ. ಬಸವಣ್ಣ ಮಾತನಾಡಿದ್ದಾರೆ. ಕನಕದಾಸರು ಮಾತನಾಡಿದ್ದಾರೆ. ದೇವರ ಭಯ ಮುಂದು ಮಾಡಿ ಒಂದು ಜಾತಿ ಶ್ರೇಷ್ಟ, ಇನ್ನೊಂದು ಕನಿಷ್ಟ ಎಂದು ಬಿಂಬಿಸುವುದೇ ಕ್ರೌಯ೯ವಾದುದು.
ದೈವಿಕ ಕಲ್ಪನೆಗಳೇ ಅವೈಜ್ಞಾನಿಕ ಎಂದು ನಮ್ಮ ಶಿವಶರಣರು ಹೇಳಿದ್ದಾರೆ. ಇಷ್ಟ ಲಿಂಗ ದೈವದ ಕಲ್ಪನೆ ನಿಮ್ಮದಾಗಲಿ ಎಂಬುದು ಸ್ವತಃ ಬಸವಣ್ಣನವರ ಕಲ್ಪನೆ.
ಸ್ಥಾಪಿತ ದೈವವನ್ನು ಪೂಜಿಸುವುದಕ್ಕಿಂತ ನಿಮ್ಮ ಇಷ್ಟಲಿಂಗ ದೈವವನ್ನು ಮಾಡಿಕೊಳ್ಳಿ ಎಂದು ನಮ್ಮ ಶರಣರು ಪ್ರತಿಪಾದಿಸಿದ್ದಾರೆ. ಹಾಗಾಗಿಯೇ ಬಸವಣ್ಣನಿಗೆ ಇಷ್ಟಲಿಂಗ ದೈವವಾಗಿ ಕೂಡಲಸಂಗಮನಿದ್ದ. ಹಾಯದಕ್ಕಿ ಲಕ್ಕಮ್ಮನಿಗೆ ಅಮಲೇಶ್ವರ ಲಿಂಗ, ಅಲ್ಲಮಪ್ರಭು ದೇವರಿಗೆ ಗುಹೇಶ್ವರನಿದ್ದ. ಅಕ್ಕಮಹಾದೇವಿಗೆ ಚನ್ನಮಲ್ಲಿಕಾಜು೯ನನಿದ್ದ, ಸೂಳೆ ಸಂಕವ್ವನಿಗೆ ನಿಲ೯ಜ್ಯಶ್ವೇರನಿದ್ದ.
ಹಾಗಾಗಿ ದೇವರ ಭಯ ಮುಂದು ಮಾಡಿ ಸ್ಥಾಪಿತ ದೈವದ ಹೆಸರಿನಲ್ಲಿ ಯಾವುದೇ ಅಮಾನವೀಯ ಆಚರಣೆ ನಡೆಯಬಾರದು. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ರೀತಿಯ ಆಚರಣೆ ನಡೆಯುತ್ತಿದೆ.
ಇದು ಹಿಂದಿನಿಂದಲೂ ನಡೆದು ಬಂದಿರುವ ಆಚರಣೆ. ಇದೊಂದು ಧಾಮಿ೯ಕ ನಂಬಿಕೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ನೆಪ ಹುಡುಕಬಾರದು. ಇದನ್ನು ನಿಮೂ೯ಲನೆ ಮಾಡುವುದರ ಬಗ್ಗೆ ಮಾತನಾಡಬೇಕು.
ವಂಚನೆಯನ್ನು ಒಳಗೊಂಡ ಧಾಮಿ೯ಕತೆ ಇರಬಾರದು ಎಂದು ನಮ್ಮ ಸಂವಿಧಾನವೇ ಹೇಳಿದೆ. ನರಬಲಿಯಾಗಲಿ, ಬೆತ್ತಲೆ ಸೇವೆಯಾಗಲಿ, ಸತಿ ಸಹಗಮನ ಪದ್ಧತಿಯ ವಿರುದ್ಧ ಸೊಲ್ಲು ಎತ್ತಿದ್ದೆ ಧಾಮಿ೯ಕ ವಂಚನೆಯ ಕಾರಣಕ್ಕಾಗಿ. ಮಡಸ್ನಾನಕ್ಕೂ ಇದು ಅನ್ವಯವಾಗುತ್ತೆ. ಸತಿ ಸಹಗಮನ ಪದ್ಧತಿ ಧಾಮಿ೯ಕ ಆಚರಣೆ ಎಂಬ ಕೆಲವರು ಮಾತು ಕೇಳಿ ಸುಮ್ಮನಿ
ನಮ್ಮ ಅಸಹ್ಯದ ಕೆಲಸಗಳನ್ನು ಬೇರೆಯವರ ಕೈಯಲ್ಲಿ ಮಾಡಿಸಬಾರದೆಂದು ಸ್ವತಃ ಗಾಂಧೀಜಿಯೇ ಹೇಳಿದ್ದರು. ಇಷ್ಟೆಲ್ಲಾ ಇದ್ದರೂ ಎಂಜಲೆಲೆ ಮೇಲೆ ಉರುಳಾಡುವುದನ್ನು ಅದೊಂದು ಆಚರಣೆ, ದೈವದ ಕಲ್ಪನೆ ಎಂಬ ಸಬೂಬು ಹೇಳುವವರನ್ನು ಏಕೆ ಪ್ರಶ್ನಿಸಬಾರದು.
ಬೆತ್ತಲೆ ಸೇವೆ ವಿರುದ್ಧ ಪ್ರಜ್ಞಾವಂತರು ಅಂದು ದನಿ ಎತ್ತಿದ್ದಕ್ಕೆ ಈಗ ಆ ಆಚರಣೆ ನಿಮೂ೯ಲನೆಯಾಗಿದೆ. ಮಡೆ ಮಡಸ್ನಾನದ ವಿಷಯಕ್ಕೆ ಬಂದರೆ ಇದನ್ನು ಪ್ರಾಜ್ಞರು ವಿರೋಧಿಸುವುದು ಸಹಜವೇ. ಆದರೆ ಪ್ರಶ್ನೆ ಮಾಡಲು ಬಂದವರ ಸೊಲ್ಲು ಅಡಗಿಸುವ ಪ್ರಯತ್ನ ಕೂಡ ಮತ್ತೊಂದು ಅಮಾನವೀಯ ಘಟನೆ.
ಈ ಅಮಾನವೀಯ ಆಚರಣೆಯನ್ನು ವಿರೋಧಿಸುವುದರ ಜತೆಗೆ ಮಲೆಕುಡಿಯ ಜನಾಂಗದವರಲ್ಲಿ ವೈಚಾರಿಕ ಪ್ರಜ್ಞೆಯನ್ನೂ ಬೆಳೆಸಬೇಕಾಗಿದೆ. ಎಂಜಲೆಲೆ ಮೇಲೆ ಉರುಳಾಡಿದರೆ ಯಾವುದೇ ಲಾಭವಿಲ್ಲ ಎಂದು ತಿಳಿ ಹೇಳಬೇಕಾಗಿದೆ. ಮುಖ್ಯವಾಗಿ ಮಲೆಕುಡಿಯ ಜನಾಂಗದವರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕಾಗಿದೆ.
ಮಡೆಸ್ನಾದ ವಿಷಯಕ್ಕೆ ಬರುವುದಾದರೆ ಯಜಮಾನ ಸಂಸ್ಕೖತಿಯ ವಿಕೖತ ರೂಪದ ನೇತೖತ್ವವನ್ನು ಮೇಲ್ವಗ೯ದವರು ವಹಿಸಿದ್ದಾರೆ. ಅಥವಾ ಅಧಿಕಾರ ಹಿಡಿದವರು ವಹಿಸಿದ್ದಾರೆ. ಯಾವತ್ತೂ ರಾಜನನ್ನು ಎದುರಿಸಬಹುದು. ಆದರೆ ಮಂತ್ರಿಯನ್ನು ಎದುರಿಸುವುದು ಕಷ್ಟ. ಇಲ್ಲಿ ರಾಜ ಯಾರು, ಮಂತ್ರಿ ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಮಡಸ್ನಾನವೆಂಬ ಪೊಳ್ಳು ನಂಬಿಕೆ ಮೇಲೆ ಬಂಜೆತನ ನಿವಾರಣೆಯಾಗುತ್ತೆ ಎಂದೋ ಅಥವಾ ರೋಗ ರುಜಿನಗಳು ವಾಸಿಯಾಗುತ್ತೆ ಎಂದು ನಂಬಿ ಬರುವ ಮಲೆ ಕುಡಿಯರು ಅಥವಾ ಇತರೆ ಜನರಿಗೆ ಎಂಜಲೆಲೆ ಮೇಲೆ ಉರುಳಾಡುವುದರಿಂದ ಯಾವುದೇ ಸಮಸ್ಯೆ ನಿವಾರಣೆಯಾಗುವುದಿಲ್ಲವೆಂದು ಜಾಗೖತಿ ಮೂಡಿಸಬೇಕು. ಆ ಜನರ ಸಮಸ್ಯೆಗಳಿಗೆ ಪಯಾ೯ಯ ದಾರಿಗಳನ್ನು ತೋರಿಸಿಕೊಡಬೇಕಾಗಿದೆ. ನಂಬಿಕೆಗಳಿಗೆ ಅಥ೯ವಿಲ್ಲ ಎಂದು ತಿಳಿಹೇಳಬೇಕಾಗಿದೆ.
ಆದರೆ ಇಂತಹ ಅಮಾನವೀಯ ಆಚರಣೆಯನ್ನು ನಿಷೇಧಗೊಳಿಸದ ಸಕಾ೯ರ ಅಷ್ಟಮಂಗಳ ಪ್ರಶ್ನೆ ಕೇಳುವುದಾಗಿ ತಿಳಿಸಿರುವುದು ಮತ್ತೊಂದು ಅದ್ವಾನದ ಪ್ರಸಂಗವಾಗುತ್ತದೆ ಅಷ್ಟೆ. ಮಡಸ್ನಾನವೆಂಬ ಕ್ರೂರ ಧಾಮಿ೯ಕ ನಂಬಿಕೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಸರಿಪಡಿಸಬೇಕು. ಎಂಜಲೆಲೆ ಮೇಲೆ ಉರುಳಲು ಬರುವವರು ಸಮಸ್ಯೆ ಇಟ್ಟುಕೊಂಡು ಬಂದಿರಬಹುದು. ಅವರ ಸಮಸ್ಯೆಗಳ ಪರಿಹಾರಕ್ಕೆ ಬೇರೆ ಮಾಗ೯ಗಳು ಇದ್ದೇ ಇರುತ್ತೆ. ಬುದ್ದಿಜೀವಿಗಳು, ಸಮಾಜ ವಿಜ್ಞಾನಿಗಳು, ಇತಿಹಾಸಕಾರರು, ಶಿಕ್ಷಣ ತಜ್ಞರು ಮಲೆಕುಡಿಯರು ಸೇರಿದಂತೆ ಮುಗ್ದ ಜನರ ಸಮಸ್ಯೆಗಳಿಗೆ ಉತ್ತರ ಹುಡುಕಬೇಕಾಗಿದೆ.
ಈ ಕ್ರೂರ ಧಾಮಿ೯ಕ ನಂಬಿಕೆಯನ್ನು ತೊಡೆದು ಹಾಕಲು ಸಮಯ ಹಿಡಿಯಬಹುದು. ಆದರೆ ತಕ್ಷಣಕ್ಕೆ ಇದೊಂದು ಅಮಾನವೀಯ ಆಚರಣೆ ಎಂದು ಉರುಳಲು ಬರುವವರಲ್ಲಿ ಜಾಗೖತಿ ಮೂಡಿಸಬೇಕು. ಇದು ಪೂಜಾ ವಿಧಾನವಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಈ ಆಚರಣೆ ನಿಲ್ಲಿಸಬೇಕು. ಇಲ್ಲವೇ ಸಕಾ೯ರವೇ ಇದನ್ನು ನಿಷೇಧ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ಪ್ರಜ್ಞಾವಂತರು ಮಡಸ್ನಾನದ ವಿರುದ್ಧ ಸಮಾಜೋ ಶೈಕ್ಷಣಿಕ ಆಂದೋಲನ ರೂಪಿಸಬೇಕಾಗಿದೆ.
ನಮ್ಮ ಕನ್ನಡದ ಹಿರಿಯ ಲೇಖಕರೊಬ್ಬರು `ದೇವರಿಲ್ಲದ ಆಧ್ಯಾತ್ಮದ' ಕಲ್ಪನೆ ಬಗ್ಗೆ ಹೇಳಿದ್ದರು. ಈಗ ನಡೆಯುತ್ತಿರುವ ಈ ಎಲ್ಲಾ ಕುರುಡು ಆಚರಣೆಯನ್ನು ನೋಡಿದರೆ ದೇವರಿಲ್ಲದ ಆಧ್ಯಾತ್ಮ ದ ಪ್ರಸ್ತುತೆಯ ಬಗ್ಗೆ ಅರಿವಾಗುತ್ತದೆ.

Saturday, October 15, 2011

ದಲಿತ ಲೋಕದಲ್ಲಿ ಯಾರೂ ಮಾತನಾಡುತ್ತಿಲ್ಲವೇಕೆ?

ಝೆನ್್ ಕಥೆಯೊಂದರಲ್ಲಿ ತುಂಬಾ ಹಸಿದಿದ್ದ ವ್ಯಕ್ತಿಯೊಬ್ಬ ಬಯಲಲ್ಲಿ ಒಣ ರೊಟ್ಟಿಯೊಂದನ್ನು ತಿನ್ನುತ್ತಿರುತ್ತಾನೆ. ಇವನ್ನಷ್ಟೆ ಹಸಿದಿದ್ದ ದಾರಿಹೋಕನ್ನೊಬ್ಬ ಆ ತುಂಡು ಒಣ ರೊಟ್ಟಿಗೆ ಕೈ ಚಾಚುತ್ತಾನೆ. ಆಗ ಆತ ಅಧ೯ ರೊಟ್ಟಿಯನ್ನು ಕೊಟ್ಟು `ಆಕಾಶದಲ್ಲಿ ಇರೋ ಚಂದ್ರ ಏನಾದರೂ ಕೈಗೆ ಸಿಕ್ಕಿದ್ದರೆ ಇಬ್ಬರು ತಿಂದು ಹಸಿವು ನೀಗಿಸಿಕೊಳ್ಳಬಹುದಿತ್ತಲ್ಲಾ' ಎಂದು ಮಾತು ಮುಗಿಸುತ್ತಾನೆ. ಈ ಮೇಲಿನ ಕಥೆಯನ್ನು `ಹಸಿವಿನ ಆಧ್ಯಾತ್ಮ' ಎಂಬ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ನಮ್ಮಲ್ಲಿ ಬಡತನ ಇದೇ ಅನ್ನೋದಕ್ಕಿಂತ ಹಸಿವು ತುಂಬಾ ಇದೆ ಎಂಬುದೇ ಧ್ವನಿಪೂಣ೯ವಾದುದು. ಹಸಿವು, ಅಪಮಾನ, ಅಸ್ಪೖಶ್ಯತೆಯಲ್ಲಿ ಮಿಂದೆದ್ದಿರುವ ದಲಿತ ಲೋಕ ಈಗಲೂ ಹಲ್ಲೆಗೆ, ಅಪಮಾನಕ್ಕೆ ತುತ್ತಾಗುತ್ತಲೇ ಇದೆ.
ಘಟನೆ 1-
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಬಬ೯ರವಾಗಿ ಕೊಚ್ಚಿ ಕೊಲೆ ಮಾಡಲಾಯಿತು. ಕೊಲೆಯಾಗುವ ಮುನ್ನ ಅವಳು ಊಟ ಮಾಡುತ್ತಿದ್ದಳು. ಗುಟುಕು ನೀರು ಕುಡಿಯಲು ಅನುವಾಗುತ್ತಿದ್ದಾಗ ಈ ಕೊಲೆ ನಡೆದು ಹೋಯಿತು. ಸಾಯುವ ಮುನ್ನ ಅವಳು ನೀರಿಗಾಗಿ ಬೇಡಿಕೊಂಡಳು. ನೀರು ಕೊಡದೇ ಹತ್ಯೆ ಮಾಡಲಾಯಿತು.
ಘಟನೆ 2-
ದಲಿತ ಕೇರಿಗೆ ಭಿಕ್ಷುಕನ್ನೊಬ್ಬ ಭಿಕ್ಷೆಗೆ ಬಂದ. ಕೇರಿಯವರು ಅನ್ನ ಕೊಡಲು ಮುಂದಾದರು. ಆದರೆ ಆತ ಒರಟಾಗಿ ಅನ್ನವನ್ನು ತಿರಸ್ಕರಿಸಿ ಅಕ್ಕಿ ಇದ್ದರೆ ಕೊಡಿ ಅನ್ನ ಬೇಡ ಎಂದು ಬಿಟ್ಟ.
ಈ ಮೇಲಿನ ಎರಡೂ ಘಟನೆ ಕೇವಲ ಸಾಂಕೇತಿವಾದದ್ದು. ಇಂತಹ ಎಷ್ಟೋ ಅಪಮಾನವನ್ನು ದಲಿತರು ಈಗಲೂ ಅನುಭವಿಸುತ್ತಿದ್ದಾರೆ.
ಇಂದು ದಲಿತ ಸಂಘಷ೯ ಸಮಿತಿಯ ಹಲವು ಬಣಗಳು ಇವೆ. ದಲಿತ್್ ಫಾಲೋಯಿಂಗ್್ ಕೂಡ ಹೆಚ್ಚಾಗಿದೆ. ಇಷ್ಟಿದ್ದರೂ ದಲಿತರ ಮೇಲಿನ ಶೋಷಣೆ ಮಾತ್ರ ನಿಂತಿಲ್ಲ. ದಲಿತ ಸಂಘಷ೯ ಸಮಿತಿಗಳೆಲ್ಲಾ ಬಿಡಿ ಬಿಡಿಯಾಗಿರುವುದರಿಂದ ಅದು ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಎಲ್ಲಕ್ಕೂ ಮುಖ್ಯವಾಗಿ ಪೊಲಿಟಿಕಲ್್ ಪವರ್್ ಇಲ್ಲದೇ ಇರುವುದು ಕೂಡ ದಲಿತ ಲೋಕ ಇನ್ನೂ ಅಪಮಾನಕ್ಕೆ ತುತ್ತಾಗುತ್ತಲೇ ಇದೆ.
ದಲಿತರಿಗೆ ಪೊಲಿಟಿಕಲ್್ ಪವರ್್ ಸಿಗುವ ಬಗ್ಗೆ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾತ್ರ ಖಚಿತವಾಗಿ ಯೋಚಿಸುತ್ತಾ ಇದೆ. ಬೇರೆ ರಾಜ್ಯಗಳಲ್ಲಿ ಇದು ಕಡಿಮೆಯೇ ಅನ್ನಬಹುದು. ಹಾಗೆ ನೋಡಿದರೆ ಉತ್ತರ ಪ್ರದೇಶದಲ್ಲಿ ಜಾತಿ ನಿಂದನೆ(ಅಟ್ರಾಸಿಟಿ) ಕೇಸು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಸಕಾ೯ರದ ರಕ್ಷಣೆ ಕಡಿಮೆಯಾದಾಗ ಸಹಜವಾಗಿ ಅಟ್ರಾಸಿಟಿ ಪ್ರಕರಣಗಳು ತಲೆ ಎತ್ತುತ್ತವೆ. ಸಕಾ೯ರಗಳಿಗೆ ತನ್ನ ಅಧಿಕಾರ ಉಳಿಸಿಕೊಳ್ಳುವ ಕಾಳಜಿಯೇ ಮುಖ್ಯವಾಗಿದೆ. ರಾಜ್ಯದಲ್ಲಿರುವ ಹಾಲಿ ಸಕಾ೯ರ ಕೂಡ ದಲಿತರು ತಮ್ಮ ಓಟ್್ಬ್ಯಾಂಕ್್ ಅಲ್ಲ ಎಂದು ಕಡೆಗಣಿಸುತ್ತಾ ಹೊರಟಿದೆ. ಅದು ಕೆಲವೇ ವಗ೯ಗಳನ್ನು ಸಂತೋಷ ಪಡಿಸಲು ಹೊರಟಿದೆ.
ದಲಿತರ ಮೇಲೆ ಹಲ್ಲೆಗಳು, ದಲಿತರ ಹತ್ಯೆಗಳು ನಡೆದಾಗ ಸಕಾ೯ರ ದಿಗ್ಭ್ರಮೆಗೊಳ್ಥುತ್ತಿಲ್ಲ. ಎರಡು ದಶಕಗಳ ಕೆಳಗೆ ಬೇರೆ ಬೇರೆ ಜಾತಿಗಳಲ್ಲೂ ಕೂಡ ಪ್ರಗತಿಪರ ಆಲೋಚನೆ ಜಾಗೖತವಾಗುತ್ತಿತ್ತು. ಪ್ರಗತಿಪರ ಚಿಂತಕರ, ಬರಹಗಾರರ ದೊಡ್ಡ ಪ್ರಭಾವ ಇತಾ೯ ಇತ್ತು. ಆಗ ದಲಿತರು ಎಚ್ಚೆತ್ತುಕೊಳ್ಳುವುದರ ಜತೆಗೆ ಇತರೆ ಜಾತಿಯವರು ಕೂಡ ಜಾತಿಗಳ ವಿರುದ್ಧವಾಗಿ, ಅಸ್ಪೖಶ್ಯತೆ ವಿರುದ್ಧವಾಗಿ ಯೋಚಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಮತೀಯ ವಿಕಾರ ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ಜಾತಿಯ ವಿಕಾರ ಬೆಳೆಯುತ್ತಾ ಇದೆ. ಮತೀಯ ವಿಚಾರ ಯಾವತ್ತೂ ಜಾತಿ ವಿನಾಶದ ಬಗ್ಗೆ ಮಾತನಾಡುತ್ತಾ ಇಲ್ಲ. ಇದು ಸದ್ಯದ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ದಲಿತ ಲೋಕ, ಅಸ್ಪೖಶ್ಯತೆಯ ಭಿನ್ನ ಭಿನ್ನ ಅಪಮಾನಗಳನ್ನು ಎದುರಿಸುತ್ತಿರುವ ಇತರೆ ಸಣ್ಣ ಸಣ್ಣ ಜಾತಿಗಳು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ.
ಅಸ್ಪೖಶ್ಯತೆ ಆಚರಣೆ ಹೊಟೇಲ್್ಗಳಲ್ಲಿ ಇಲ್ಲದಿರಬಹುದು. ಆದರೆ ಮನೆ ಬಾಡಿಗೆ ನೀಡುವ ವಿಷಯದಲ್ಲಿ ಈಗಲೂ ಕೂಡ ಅಸ್ಪೖಶ್ಯತೆ ಜಾರಿಯಲ್ಲಿದೆ. ಅಟ್ರಾಸಿಟಿ ಕೇಸು ಕೂಡ ದಲಿತರಿಗೆ ಉಪಯೋಗ ಆಗ್ತಾ ಇಲ್ಲ. ಜಾತಿ ನಿಂದನೆ ಕೇಸು ಬಿದ್ದರೂ ಸವಣೀ೯ಯರು, ಪೊಲೀಸ್್ ಹಾಗೂ ಕಾನೂನಿನಿಂದ ನುಣುಚಿಕೊಳ್ಳುತ್ತಾ ಇದ್ದಾರೆ. ಅಟ್ರಾಸಿಟಿ ಕೇಸ್್ನಲ್ಲಿ ಏಕೆ ಶಿಕ್ಷೆಯಾಗುತ್ತಿಲ್ಲ. ಇದು ಯಾರ ವೈಫಲ್ಯ, ಸಕಾ೯ರದ್ದೋ ಮತ್ಯಾರದ್ದೋ ಎಂಬುದರ ಬಗ್ಗೆ ಚಿಂತಿಸುವ ಗೋಜಿಗೂ ಸಹ ಹೋಗುತ್ತಿಲ್ಲ.
ಜಾತಿ ಐಡೆಂಟಿಟಿಗೆ ಬದ್ಧನಾಗೋದು ತಪ್ಪು ಎಂದು ಬಹಳಷ್ಟು ಮಂದಿಗೆ ಅನಿಸುತ್ತಾ ಇಲ್ಲ. ದಲಿತ ಸಮುದಾಯ ಎಚ್ಚರ ಆಗುತ್ತಿರುವ ಹೊತ್ತಲ್ಲಿ ದಲಿತರ ಹೊಸ ತಲೆಮಾರು ತನ್ನ ಹಕ್ಕುಗಳ ಬಗ್ಗೆ ಗಟ್ಟಿಯಾದ ನಿಲುವು ತೆಗೆದುಕೊಳ್ಳುತ್ತಿರುವ ಸಂದಭ೯ದಲ್ಲೇ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಉತ್ತರಪ್ರದೇಶದಲ್ಲಿ ಅಟ್ರಾಸಿಟಿ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಮಾಯಾವತಿ ಸಕಾ೯ರ ಬುದ್ದಿಸಂ ತತ್ವದಡಿ ಕೆಲಸ ಮಾಡುತ್ತಿದೆ. ಅಲ್ಲದೇ ಅಂಬೇಡ್ಕರ್್ ಚಿಂತನೆಯನ್ನು ದೊಡ್ಡ ಮಟ್ಟದಲ್ಲಿ ಹಬ್ಬಿಸುತ್ತಾ ಇದೆ. ದಲಿತ ಪರವಾಗಿ ಇರುವ ಅಧಿಕಾರಿಶಾಹಿಗಳು ಬೇಕು, ಪೊಲೀಸರು ಬೇಕು. ಅಲ್ಲಿನ ಸಕಾ೯ರವೇ ಪ್ರಗತಿ ಪರ ಚಿಂತನೆ ಹೊರಡಿಸಿದಾಗ ಸಹಜವಾಗಿ ಅಲ್ಲಿ ಅಟ್ರಾಸಿಟಿ ಕೇಸುಗಳು ಗಣನೀಯವಾಗಿ ತಗ್ಗಿದೆ. ದಲಿತರ ಮೇಲಿನ ಹಲ್ಲೆಗೆ ಸಕಾ೯ರ ಬಹಳ ಕಠಿಣ ಕ್ರಮ ಕೈಗೊಳ್ಳುತ್ತೆ ಎಂಬ ಸಕಾ೯ರದ ಭಯ ಇರಬೇಕು. ಉತ್ತರ ಪ್ರದೇಶದಲ್ಲಿ ಇದು ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಮಾತ್ರ ಕಾಟಾಚಾರಕ್ಕೆ ಇದೆ.
ಅಲ್ಲದೇ ಅಲ್ಲಿನ ಬಹುಜನ ಸಮಾಜವಾದಿ ಪಕ್ಷ ತನ್ನ ಕಾಯ೯ಕತ೯ರ ಮಟ್ಟದಲ್ಲೂ ಕೂಡ ಜಾತಿಯತೆ ತಪ್ಪು ಅಂತಾ ಮಾತನಾಡುತ್ತಿದೆ. ಇವೆಲ್ಲಾ ಹೊಸ ಚಿಂತನೆಯನ್ನು ಹುಟ್ಟು ಹಾಕುವಲ್ಲಿ ಸಹಕಾರಿಯಾಗುತ್ತಿದೆ. ಜಾತಿ ವಿನಾಶದ ಬಗ್ಗೆ ರಾಜಕಾರಣಿಗಳು ಮಾತನಾಡುತ್ತಾ ಇಲ್ಲ. ಜಾತಿಯ ವಿಕಾರಗಳ ಬಗ್ಗೆ ಉಳಿದ ಜಾತಿಯವರು ಧ್ವನಿ ಎತ್ತುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ದಲಿತರ ಬಗೆಗೆ, ಅವರ ಹಕ್ಕುಗಳ ಬಗ್ಗೆ ಮಾತನಾಡುವ ವಗ೯ಗಳಾದ ಶಿಕ್ಷಕರು, ವಕೀಲರು, ಮಠಾಧೀಶರು ಸುಮ್ಮನಿದ್ದಾರೆ. ಸಾಹಿತಿಗಳು, ಪ್ರಗತಿಪರರು ಮಾತ್ರ ದಲಿತರ ಬಗ್ಗೆ ಧ್ವನಿಯಾಗುತ್ತಾ ಇದ್ದಾರೆ.
ಜನಸಂಪಕ೯ ಇರುವ, ದಿನ ನಿತ್ಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವವರು ಇದರ ಬಗ್ಗೆ ಮಾತನಾಡಬೇಕು. ಆದರೆ ಆ ವಗ೯ ಚಕಾರವೆತ್ತುತ್ತಿಲ್ಲ.
ಎರಡೂವರೆ ದಶಕಗಳ ಹಿಂದೆ ದಲಿತರ ಬಗ್ಗೆ ಪಿ. ಲಂಕೇಶ್್, ಸಿದ್ದಲಿಂಗಯ್ಯ, ಬಿ. ಕೖಷ್ಣಪ್ಪ, ದೇವನೂರು, ತೇಜಸ್ವಿ ಮುಂತಾದ ದೊಡ್ಡ ಬರಹಗಾರರು, ಹೋರಾಟಗಾರರು ದೊಡ್ಡ ಮಟ್ಟದಲ್ಲಿ ಧ್ವನಿ ಎತುತ್ತಿದ್ದರು. ಇವರ ಜತೆಗೆ ಲೇಖಕರ ಅನುಯಾಯಿಗಳು ಕೂಡ ಮಾತನಾಡುತ್ತಿದ್ದರು. ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. ದಲಿತರ ಬಗ್ಗೆ ಅವರ ರಕ್ಷಣೆ ಬಗ್ಗೆ ಗಟ್ಟಿಯಾಗಿ ಮಾತನಾಡುವ ಫೋರಂಗಳು ಕೂಡ ಮಾತು ನಿಲ್ಲಿಸಿದೆ. ಹೊಸ ಕಾಲದ ಬರಹಗಾರರು ಕೂಡ ಎಲ್ಲೆಡೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಹಿಂದುಳಿದ ವಗ೯ದವರಿಗಿಂತ ಹೆಚ್ಚು ವಿದ್ಯಾವಂತ ಮತ್ತು ಎಚ್ಚರಗೊಂಡ ವಗ೯ ದಲಿತರಲ್ಲಿ ಸೖಷ್ಟಿಯಾಗಿದೆ. ಆದರೂ ಕೂಡ ಅವರ ಮೇಲಿನ ದೌಜ೯ನ್ಯ ಕಡಿಮೆಯಾಗಿಲ್ಲ. ಒಬ್ಬ ಮಾಯಾವತಿ ಬಿಟ್ಟರೆ ಆ ಸಮುದಾಯದಲ್ಲಿ ದೊಡ್ಡ ರಾಜಕೀಯ ನೇತಾರರು ಹೊರಹೊಮ್ಮಿಲ್ಲ. ದಲಿತ ಸಮುದಾಯ ಮತ್ತು ಶೋಷಿತ ವಗ೯ದವರು ಒಗ್ಗೂಡದಂತೆ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಾ ಇದೆ. ದಲಿತರು ರಾಜಕೀಯ ಅಧಿಕಾರ ಪಡೆಯುವುದನ್ನು ಎಲ್ಲಾ ರಾಜಕೀಯ ಪಕ್ಷಗಳು ತಪ್ಪಿಸುತ್ತಾ ಇದೆ. ಯಾವೊಂದು ಪಕ್ಷವು ದಲಿತರನ್ನು ಮುಖ್ಯಮಂತ್ರಿ ಮಾಡ್ತೀವಿ ಅಂತಾ ಹೇಳ್ತಾ ಇಲ್ಲ. ದಲಿತರ ದೌಜ೯ನ್ಯ ನಿಲ್ಲಬೇಕಾದರೆ ಅಧಿಕಾರ ಬೇಕು. ಸಕಾ೯ರದ ರಕ್ಷಣೆ ಇಲ್ಲದೇ ಹೋದರೆ ದಲಿತ ಸಮುದಾಯ ಅನಾಹುತಗಳನ್ನು ಎದುರಿಸಬೇಕಾದಂತ ಸ್ಥಿತಿ ನಿಮಾ೯ಣವಾಗುತ್ತಲೇ ಹೋಗುತ್ತದೆ.
ಹಿಂದೆಲ್ಲಾ ದಲಿತ ಸಂಘಷ೯ ಸಮಿತಿಗಳ ಸಭೆಗೆ ಆ ವಗ೯ಗಳ ಬಗ್ಗೆ ಕಾಳಜಿ ಇರುವ ಇತರೆ ಜಾತಿಯವರು ಕೂಡ ಹೋಗುತ್ತಿದ್ದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಅವರ ಹೋರಾಟಕ್ಕೂ ದನಿಯಾಗುತ್ತಿದ್ದರು. ಆಗ ದಲಿತ ಸಂಘಷ೯ ಸಮಿತಿ ಸಭೆಗೆ ಬಡವರು ಹೋಗುತ್ತಿದ್ದರು. ಶ್ರಮಿಕರು ಹೋಗುತ್ತಿದ್ದರು. ಕೂಲಿ ಕಾಮಿ೯ಕರು ಕೂಡ ಹೋಗುತ್ತಿದ್ದರು. ಆದರೆ ಈಗ ದಲಿತ ಸಂಘಷ೯ ಸಮಿತಿ ಸಭೆಗೆ ಬೇರೆ ಜಾತಿಯವರು ಹೋಗುತ್ತಿಲ್ಲ. ಪ್ರಜ್ಞೆಯಲ್ಲಿ ಪಲ್ಲಟ ಉಂಟಾಗುತ್ತಿಲ್ಲ. ಜಾತಿಯತೆ ನಮ್ಮ ಪ್ರಜ್ಞೆಯ ವಿಕಾಸಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಯಾರೂ ವಿವೇಕ ಮೂಡಿಸುತ್ತಿಲ್ಲ.
ಅಸ್ಪೖಶ್ಯತೆ ಅನುಭವ ಇರುವ ದಲಿತರು ಮತ್ತು ಅಸ್ಪೖಶ್ಯತೆಯ ವಿಭಿನ್ನ ಅನುಭವ ಇರುವ ಕ್ಷೌರಿಕ ಸಮುದಾಯ ಒಂದಾಗಬೇಕಾದ ಸಂದಭ೯ದಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ದಲಿತನ ಮೇಲೆ ಹಲ್ಲೆ ನಡೆದಿದೆ. ಇದು ನಿಜಕ್ಕೂ ಅತ್ಯಂತ ಅಮಾನವೀಯ ಘಟನೆ. ಆದರೆ ಈ ಘಟನೆಯನ್ನು ಯಾರೂ ಕ್ಷೌರಿಕ ಸಮುದಾಯದ ವಿರುದ್ಧ ಮಾತನಾಡಬಾರದು. ಈ ಪ್ರಕರಣವನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಚಚಿ೯ಸಬೇಕು. ಕ್ಷೌರಿಕ ಸಮುದಾಯ ಸೇರಿದಂತೆ ಎಲ್ಲಾ ಅವಮಾನಿತ ಜಾತಿಗಳಲ್ಲಿ ಆತ್ಮಗೌರವ ತುಂಬುವ ಕೆಲಸವನ್ನು ದಲಿತ ಸಂಘಷ೯ ಸಮಿತಿ ಮಾಡುತ್ತಾ ಬಂದಿದೆ. ಕ್ಷೌರಿಕರು ಕೂಡ ಜಾತಿ ಪದ್ಧತಿಯಿಂದ ಅಸ್ಪೖಶ್ಯತೆಯ ಬೇರೆ ಬೇರೆ ರೀತಿಯಿಂದ ನೊಂದಿದ್ದಾರೆ. ನೆಲ್ಸನ್್ ಮಂಡೇಲಾ ಜನ್ಮದಿನೋತ್ಸವದಂದು ಹಾಸ್ಯ ನಟ ಮುತ್ತುರಾಜ್್ ಅವರು ದಲಿತ ಕೇರಿಗಳಿಗೆ ಹೋಗಿ ಕಟಿಂಗ್್ ಮಾಡುವ ಮೂಲಕ ಜಾಗೖತಿ ಮೂಡಿಸಿದ್ದರು. ಅವೆಲ್ಲವೂ ಚರಿತ್ರೆಯಲ್ಲಿ ದಾಖಲಾಗಬೇಕು. ಎಷ್ಟೋ ಕಡೆ ದಲಿತರನ್ನು ಈಗಲೂ ಜೀತದಾಳಾಗಿ ಇಟ್ಟುಕೊಂಡಿದ್ದಾರೆ. ಆದರೆ ಆ ಪ್ರಕರಣಗಳು ಮಾತ್ರ ಇನ್ನೂ ಹೊರ ಬಂದಿಲ್ಲ. ಕಿರುಗಾವಲು ಗ್ರಾಮದ ದಲಿತ ಚಿಕ್ಕಮಂಚಯ್ಯನ ಮೇಲೆ ದೌಜ೯ನ್ಯವಾದಾಗ ಬೇರೆ ಜಾತಿಯವರು ಹಡಪದ ಹಪ್ಪಣ ನ ಬಗ್ಗೆ ಹರಳಯ್ಯನ ಬಗ್ಗೆ ಹೇಳಬೇಕಾಗಿತ್ತು.
ಹಿಂದೆ ದಲಿತರ ಮೇಲೆ ಹಲ್ಲೆ, ದೌಜ೯ನ್ಯ ನಡೆದಾಗ ಬೇರೆ ಜಾತಿಯವರು ಕೂಡ ಖಂಡಿಸುತ್ತಿದ್ದರು. ಬೇರೆ ಬೇರೆ ಜಾತಿಯಲ್ಲಿನ ಜಾತಿಯತೆ ಬಗ್ಗೆ ಆಯಾ ಜಾತಿಯವರು ಸಂಕೋಚ ಆಗದಂತೆ ವತಿ೯ಸುತ್ತಿದ್ದಾರೆ. ಹೀಗಾಗಿ ದಲಿತರ ಮೇಲಿನ ದೌಜ೯ನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಗ್ರಾಮೀಣ ಭಾಗದಲ್ಲೂ ಸಹ ರಾಜಕೀಯ ನೇತಾರರು ಜಾತಿಯತೆಯನ್ನು ದೊಡ್ಡ ಮಟ್ಟದಲ್ಲಿ ಸೖಷ್ಟಿಸುತ್ತಾ ಹೋಗಿದ್ದಾರೆ. ದಲಿತರಲ್ಲೇ ಎಡಗೈ, ಬಲಗೈ ಎಂದು ರಾಜಕೀಯ ನೇತಾರರು ವಗೀ೯ಕರಿಸಿದ್ದಾರೆ.
ಒಟ್ಟಾರೆಯಾಗಿ ದಲಿತರ ಬಗ್ಗೆ ಎಲ್ಲ ಜಾತಿಯವರು ಮಾತನಾಡಬೇಕಿದೆ. ಸಕಾ೯ರದ ರಕ್ಷಣೆ ಇಲ್ಲದಿದ್ದಾಗ ದೌಜ೯ನ್ಯಗಳು, ಜಾತಿ ನಿಂದನೆ ನಡೆಯುತ್ತಾ ಹೋಗುತ್ತೆ. ಹೀಗಾಗಿ ದಲಿತರಿಗೆ ರಾಜಕೀಯ ಅಧಿಕಾರ ಕೂಡ ಮುಖ್ಯ. ದಲಿತರು, ಹಿಂದುಳಿದವರು, ಶೋಷಿತರು ಒಟ್ಟಾಗಿ ರಾಜಕೀಯ ಶಕ್ತಿ ಕಂಡುಕೊಳ್ಳಬೇಕಾಗಿದೆ.

Monday, September 26, 2011

ಒಂಟೆಗಳೊಂದಿಗೆ ಹತಾಷ ನಡಿಗೆ


ಕೈಯಲ್ಲಿ ಬಿಡಿಗಾಸಿಲ್ಲ, ಬಗಲಲ್ಲಿ ಹಿಡಿಯಷ್ಟು ಆಹಾರವೂ ಇಲ್ಲ. ಹೈಕೋಟ್್೯ ಆದೇಶ ಪಾಲಿಸದೆ ವಿಧಿಯಿಲ್ಲ. ಜತೆಗೆ ಒಂದಿಷ್ಟು ಕನಿಕರವಿಲ್ಲದ ಬೆಂಗಳೂರು ಆಡಳಿತ ವಗ೯ದವರ ಧೋರಣೆಯಿಂದಾಗಿ 4 ಗಭಿ೯ಣಿ ಒಂಟೆಗಳು, 3 ಮರಿ ಒಂಟೆ ಸೇರಿ 39 ಒಂಟೆಗಳೊಂದಿಗೆ 30 ಮಂದಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಪಾದಯಾತ್ರೆ ಹೊರಟಿರುವ ದಾರುಣ ಕಥೆ ಇದು.
ಬೆಂಗಳೂರಿನ ಆವಲಹಳ್ಳಿಯಲ್ಲಿ ಒಂಟೆಗಳನ್ನು ಕಟ್ಟಿಕೊಂಡು ಕಳೆದ 9 ವಷ೯ಗಳಿಂದ ಮಧ್ಯಪ್ರದೇಶ ಮೂಲದ ಈ ಸಮುದಾಯ ಜೀವನ ನಡೆಸುತ್ತಿತ್ತು. ಆದರೆ ಪ್ರಾಣಿದಯಾ ಸಂಘದವರು ಪ್ರಾಣಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ರಾಜಸ್ಥಾನ ಮೂಲದವರ ವಿರುದ್ಧ ಕೋಟ್್೯ ಮೆಟ್ಟಿಲೇರಿದ್ದರು.
ಪ್ರಾಣಿ ದಯಾ ಸಂಘದ ವಾದವನ್ನು ಪುರಸ್ಕರಿಸಿದ ಕೋಟ್್೯ ಮಧ್ಯಪ್ರದೇಶಕ್ಕೆ ತೆರಳುವಂತೆ ಇವರಿಗೆ ಸೂಚಿಸಿತ್ತು. ಕೋಟ್್೯ ಆದೇಶ ಬಂದ ಕೂಡಲೇ ಬೆಂಗಳೂರಿನ ಅಧಿಕಾರಿ ವಗ೯ ಏಕಾಏಕಿ ಹೊರಡುವಂತೆ ಕಟ್ಟಪ್ಪಣೆ ಮಾಡಿತು.
ಹೀಗಾಗಿ ಅಧಿಕಾರಿಗಳ ಧೋರಣೆಗೆ ಬೆಚ್ಚಿದ ಇವರು ಕೈಯಲ್ಲಿ ಬಿಡಿಗಾಸಿಲ್ಲದೆ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಒಂಟೆಗಳೊಂದಿಗೆ ನಡೆದು ನಡೆದು ಬಸವಳಿದು ಹೋಗಿದ್ದ ಇವರು ತುಮಕೂರಿಗೆ ಬಂದಾಗ `ಕನ್ನಡಪ್ರಭ' ದೊಂದಿಗೆ ತಮ್ಮ ನೋವಿನ ಕಥೆಗಳನ್ನು ಬಿಚ್ಚಿಟ್ಟರು.
ಕಳೆದ ಹಲವಾರು ವಷ೯ಗಳಿಂದ ಇವರು ಬೆಂಗಳೂರಿನ ಹೊರವಲಯಗಳಲ್ಲಿ ಬೀಡು ಬಿಟ್ಟಿದ್ದರು. ಶ್ರೀಮಂತರ ಮದುವೆ ಮತ್ತಿತರ ಕಾಯ೯ಕ್ರಮಗಳಿಗೆ ಒಂಟೆಗಳನ್ನು ಕೊಂಡೊಯ್ಯುದ್ದು ಅವರು ನೀಡುವ 300 ರು ನಿಂದ 500 ರು. ಇವರಿಗೆ ಜೀವನಾಧಾರ. ಅವತ್ತಿನ ದುಡಿಮೆ ಅವತ್ತಿಗೆ ಸರಿಹೋಗುತ್ತಿತ್ತು. ಈಗ ಏಕಾಏಕಿ ಮಧ್ಯಪ್ರದೇಶಕ್ಕೆ ತೆರಳಬೇಕಾಗಿದ್ದರಿಂದ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಹೀಗಾಗಿ ನಡೆದೇ ಹೋಗುವ ಸ್ಥಿತಿ ಎದುರಾಗಿದೆ.
ಪ್ರತಿ ದಿನ 15 ಕಿ.ಮೀ. ಮಾತ್ರ ಒಂಟೆಯೊಂದಿಗೆ ನಡೆಯಲು ಇವರು ಶಕ್ತರಾಗಿದ್ದಾರೆ. ಆದರೆ ಬೆಂಗಳೂರಿನಿಂದ ತುಮಕೂರಿಗೆ ಬರುವಷ್ಟರಲ್ಲಿ ಬಸವಳಿದಿದ್ದಾರೆ. ತಿನ್ನಲೂ ಇವರಿಗೆ ಆಹಾರವಿಲ್ಲ. ಒಂಟೆಗಳಿಗೂ ಇಲ್ಲ. ಹಾಗಾಗಿ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.
ಆಡಳಿತ ವಗ೯ದವರು ನಮಗೆ ಸ್ವಲ್ಪ ಸಮಯ ಕೊಟ್ಟಿದ್ದರೆ ಹೇಗೋ ಗಾಡಿ ವ್ಯವಸ್ಥೆ ಮಾಡಿಕೊಂಡು ಮಧ್ಯಪ್ರದೇಶಕ್ಕೆ ತೆರಳುತ್ತಿದ್ದೆವು. ಆದರೆ ಈಗ ನಮಗೆ ತೊಂದರೆಯಾಗಿದೆ ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ.
ನಾವು ಒಂಟೆಯಿಂದಲೇ ಜೀವನ ನಡೆಸುತ್ತಿದ್ದೇವೆ. ಈ ಹಣದಲ್ಲೇ ನಮ್ಮ ಮಕ್ಕಳ ವಿದ್ಯಾಭ್ಯಾಸ ಕೂಡ ನಡೆಯುತ್ತಿದೆ. ನಮ್ಮೊಂದಿಗೆ ವೖದ್ಧರೂ ಇದ್ದರು. ಇವರೆಲ್ಲರಿಗೂ ಈಗ ಪಾದಯಾತ್ರೆಯ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಕಣ್ಣೀರಿಟ್ಟರು.
ಒಟ್ಟಾರೆಯಾಗಿ ಗಭೀ೯ಣಿ ಒಂಟೆಗಳು, ಮರಿ ಒಂಟೆಗಳು, ಮಕ್ಕಳು, ವೖದ್ಧರೊಂದಿಗೆ ಇವರು ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಈ ಮಳೆಗಾಲದಲ್ಲೇ ಪಾದಯಾತ್ರೆ ಹೊರಟಿದ್ದಾರೆ. ಊರ ಹೊರವಲಯದಲ್ಲಿ ತಂಗುತ್ತಾರೆ. ಯಾರಾದರೂ ಸಹಾಯ ಮಾಡಿದರೆ ತಿನ್ನುತ್ತಾರೆ. ಇಲ್ಲದಿದ್ದರೆ ಹಸಿದೇ ಮಲಗುವಂತಹ ಪರಿಸ್ಥಿತಿ ಇದೆ.

Sunday, September 18, 2011

ಇನ್ನೂ ನೆನಪಿನಿಂದ ಮಾಸಿಲ್ಲ ಪೊಫೆಸರ್್ ಚಾಟಿ!


ಅಂದು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಯಡಿಯೂರಪ್ಪ ಸಕಾ೯ರ ಹರಿಹರದಲ್ಲಿ ಅನ್ನದಾತನ ಎದೆಗೆ ಗುಂಡಿಕ್ಕಿದ್ದೂ ಆಯ್ತು. ನಂತರ ರೈತ ಬಜೆಟ್್ ಮಂಡಿಸಿ ಸುಳ್ಳೆ ಬೀಗಿದ್ದೂ ಆಯ್ತು. ರೈತರ ಬಗ್ಗೆ ಮರಗುವವರು, ಸುಳ್ಳು ಸುಳ್ಳೆ ಓಲೈಸುವರು, ಮೊಸಳೆ ಕಣ್ಣೀರು ಸುರಿಸುವವರ ಮಧ್ಯೆ ರೈತರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ, ಸ್ವಾಭಿಮಾನದ ಪಾಠ ಬೋಧಿಸಿದ ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ ಬಂದಿದೆ.
ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿಯವರ ಹೋರಾಟದ ದಿವಸಗಳಲ್ಲೂ ರೈತರ ಸಮಸ್ಯೆ ಇತ್ತು. ಈಗಲೂ ಸಮಸ್ಯೆ ಇದೆ. ಸುಮಾರು ಎರಡು ದಶಕಗಳಿಗೂ ಮೀರಿದ ಹೋರಾಟದಲ್ಲಿ ಪ್ರೊಫೆಸರ್್ ಎಂ.ಡಿ.ಎನ್್ ಅವರು ರೈತರಿಗೆ ಹೊಸ ಭಾಷೆ ಹೇಳಿಕೊಟ್ಟರು. ಸತ್ಯ ಇರುವ ಕಡೆ ಧೈಯ೯ ಪ್ರಕಟಿಸುವ ಪಟ್ಟನ್ನು ಕಲಿಸಿದರು. ಎಲ್ಲಕ್ಕೂ ಮಿಗಿಲಾಗಿ ನೇಗಿಲಯೋಗಿಗೆ ಸ್ವಾಭಿಮಾನದ ಹೊಸ ಮಂತ್ರ ಕಲಿಸಿಕೊಟ್ಟರು.
ಸ್ವಾತಂತ್ರ್ಯೋತ್ತರದಿಂದ ಈಗಲೂ ಕೖಷಿ ಅತ್ಯಂತ ನಿಲ೯ಕ್ಷ್ಯಕ್ಕೆ ಒಳಗಾದ ಕ್ಷೇತ್ರ. ರೈತರನ್ನು ಒಲಿಸಿಕೊಳ್ಳಲು ಸಕಾ೯ರಗಳು ಏನೆಲ್ಲಾ ಕಸರತ್ತು ಮಾಡಿ ಯೋಜನೆಗಳನ್ನು ರೂಪಿಸಿದರೂ ಅದು ರೈತ ಸಮುದಾಯವನ್ನು ತಲುಪಲು ಸಾಧ್ಯವಾಗಲೇ ಇಲ್ಲ. ಈ ಕಾರಣವೂ ಸೇರಿದಂತೆ ಹಲವಾರು ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ಸಲುವಾಗಿ ರೈತ ಹೋರಾಟ ರೂಪುಗೊಂಡಿತು. ಗಾಂಧಿವಾದಿ ರುದ್ರಪ್ಪನವರು, ಎನ್.ಡಿ. ಸುಂದರೇಶ್್, ಕಡಿದಾಳು ಶಾಮಣ್ಣ, ಪ್ರೊಫೆಸರ್್ ಎಂ.ಡಿ. ನಂಜುಂಡಸ್ವಾಮಿ ಸೇರಿದಂತೆ ಹತ್ತು ಹಲವಾರು ಮಂದಿ ಹೋರಾಟಕ್ಕೊಂದು ಸಾಂಘಿಕ ಶಕ್ತಿ ತುಂಬಿದರು. ಆದರೆ ಹೋರಾಟಕ್ಕೆ ಚಾಲನಾ ಶಕ್ತಿಯಾಗಿದ್ದವರು ಪ್ರೊಫೆಸರ್್. ಕನಾ೯ಟಕದಲ್ಲಿ ನಂಜುಂಡಸ್ವಾಮಿ ಅವರನ್ನು ಹೊರೆತುಪಡಿಸಿ ಸಂಘಟನೆ ಯೋಚಿಸಲು ಸಾಧ್ಯವಿಲ್ಲ.
ನಂಜುಂಡಸ್ವಾಮಿ ಕೇವಲ ಬತ್ತದ ಬೆಲೆಯ ಬಗ್ಗೆ, ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವ ಬಗ್ಗೆ, ಪಹಣಿಗಳ ಬಗ್ಗೆಯಷ್ಟೆ ಧ್ವನಿ ಎತ್ತಲಿಲ್ಲ. ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದರು. ಕೋಮು ಸೌಹಾದ೯ತೆಯ ಬಗ್ಗೆಯೂ ಮಾತನಾಡಿದರು. ಪರಿಸರ ಸಂಬಂಧಿ ವಿಷಯಗಳ ಬಗ್ಗೆಯೂ ಚಚಿ೯ಸಿದರು.
ಎಷ್ಟೋ ಮೇಷ್ಟ್ರಗಳಿಗೆ ಅಥ೯ವಾಗದ ವಿಷಯಗಳನ್ನು ಸರಳವಾಗಿ ರೈತರಿಗೆ ಮುಟ್ಟಿಸಿದರು. ವಿಶ್ವ ವಾಣಿಜ್ಯ ಸಂಸ್ಥೆ ಇರಲಿ, ಮುಕ್ತ ವಾಣಿಜ್ಯ ಒಪ್ಪಂದಗಳಿರಲಿ, ಪೇಟೆಂಟ್್ ವಿಷಯಗಳೇ ಇರಲಿ ಅನ್ನದಾತನ ಸಮೂಹಕ್ಕೆ ಮನದಟ್ಟಾಗುವಂತೆ ಪಾಠ ಮಾಡಿದರು. ಸದ್ದಿಲ್ಲದೆ ರೈತನಲ್ಲಿ ಹೋರಾಟದ ಕಾವು ಏರಿಸಿದರು.
ರೈತರಲ್ಲಿ ಸ್ವಾಭಿಮಾನ ಮೂಡಿಸಿದ ಹೋರಾಟದ ಕಿಚ್ಚು ಹೊತ್ತಿಸಿದ ನಂಜುಂಡಸ್ವಾಮಿ ಅವರಿಗೆ ಕಾಂಗ್ರೆಸ್್ ಸಕಾ೯ರ ಎಂಎಲ್್ಸಿ ಮಾಡಿ ಮಂತ್ರಿ ಪದವಿ ನೀಡುವ ಆಹ್ವಾನ ನೀಡಿತು. ಆದರೆ ಪಕ್ಷದೊಳಗೆ ಹೋಗಿ ತಗಲಾಕಿಕೊಂಡರೆ ಏನೂ ಮಾಡಲು ಆಗುವಿದಿಲ್ಲ ಎಂದು ಅರಿತಿದ್ದ ನಂಜುಂಡಸ್ವಾಮಿ ಎಲ್ಲವನ್ನು ಬದಿಗೊತ್ತಿ ರೈತರ ಬೆನ್ನಿಗೆ ನಿಂತರು. ರಾಜ್ಯದ ಮೂಲೆ ಮೂಲೆಗಳಿಗೂ ರೈತ ಹೋರಾಟವನ್ನು ಕಟ್ಟಿ ಬೆಳೆಸಿದರು.
ರೈತ ಹೋರಾಟಕ್ಕೊಂದು ಸಾಂಘಿಕ ರೂಪ ಕೊಡುವ ಸಲುವಾಗಿ ಯುವ ಜನಸಭಾದಲ್ಲಿ ಸಕ್ರಿಯರಾದರು. ಪ್ರೊಫೆಸರ್್, ತೇಜಸ್ವಿ, ಕಡಿದಾಳು ಶಾಮಣ್ಣ, ರಾಮದಾಸ್್, ದೇವನೂರು ಮಹಾದೇವ ಮುಂತಾದವರು ಇದರಲ್ಲಿದ್ದರು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋದರು. ಕೖಷಿ ಮಾಡಿಕೊಂಡೇ ಹೋರಾಟ ರೂಪಿಸಿದರು.
ಪಮಿ೯ಷನ್್ ಇಲ್ಲದೆ ಅಧಿಕಾರಿಗಳು ಹಳ್ಳಿಗಳಿಗೆ ಬರಕೂಡದೆಂದು ಫಮಾ೯ನ್್ ಹೊರಡಿಸಿದವರು ಪ್ರೊಫೆಸರ್್. ಈಗಲೂ ಎಷ್ಟೋ ಹಳ್ಳಿಗಳಲ್ಲಿ ಈ ಬೋಡ್್೯ ಇದೆ. ಸರಿಯಾಗಿ ಕರೆಂಟ್್ ಕೊಡದಿದ್ದರೆ ಬಿಲ್್ ಕಟ್ಟದವರು ಇದ್ದಾರೆ.
ಒಮ್ಮೆ ಹೀಗಾಯ್ತು. ಚಾಮರಾಜನಗರದಿಂದ ರೈತನ್ನೊಬ್ಬ ತನ್ನ ಸಮಸ್ಯೆಯನ್ನು ಎಂ.ಡಿ. ನಂಜುಂಡಸ್ವಾಮಿ ಅವರಲ್ಲಿ ಹೇಳಿಕೊಂಡ. ಆತನ ಅಳಲು ಕೇಳಿಸಿಕೊಂಡ ನಂಜುಂಡಸ್ವಾಮಿ ಅವರು ಹೋಗಿ ಆ ಅಧಿಕಾರಿಯ ಕಪಾಳಕ್ಕೆ ಹೊಡಿ ಎಂದರು. ದೂಸ್ರಾ ಮಾತೇ ಇಲ್ಲ. ಆ ರೈತ ನೇರ ತನ್ನ ಊರಿಗೆ ಹೋಗಿ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದ.
ನಾನ್್ ವಾಯಲೆನ್ಸ್್ ಡೈರೆಕ್ಟ್್ ಆಕ್ಷನ್್ ಎಂಬುದು ಪ್ರೊಫೆಸರ್್ ಅವರ ಸೂತ್ರ. ಇದಕ್ಕೊಂದು ಉದಾಹರಣೆ ಇಲ್ಲಿದೆ. ಶಿವಮೊಗ್ಗದ ಒಂದು ಹಳ್ಳಿಯಲ್ಲಿ ಕರೆಂಟ್್ ಅನ್ನು ಸರಿಯಾಗಿ ಕೊಡ್ತಾನೇ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಬಿಲ್್ ಕಟ್ಟುವ ಗೋಜಿಗೆ ಹೋಗಲಿಲ್ಲ. ಈ ಹಳ್ಳಿಗೆ ದೌಡೋಡಿದ ಅದಿಕಾರಿಗಳು ಹಣ ಕಟ್ಟದಿದ್ದರೆ ಪವರ್್ ಕಟ್್ ಮಾಡುವ ಬೆದರಿಕೆ ಹಾಕಿದರು. ತಕ್ಷಣ ಆ ಹಳ್ಳಿಯ ರೈತ ಸಮುದಾಯ ಮನೆಗೆ ಹೋಗಿ ತಾವು ಬೆಳೆದಿದ್ದ ಧವಸ, ಧಾನ್ಯಗಳನ್ನು ತಂದು ಹೊರಗೆ ಹಾಕಿ `ಇದನ್ನು ಬೇಕಾದರೆ ತೆಗೆದುಕೊಂಡು ಹೋಗಿ' ಎಂದು ಬಿಟ್ಟಿತು. ತಬ್ಬಿಬ್ಬಾದ ಅಧಿಕಾರಿಗಳು ಬಂದ ದಾರಿಗೆ ಸುಂಕುವಿಲ್ಲವೆಂಬತೆ ಊರ ಹಾದಿ ಹಿಡಿದರು.
ಅವರು ಹೋರಾಟದ ಸ್ವರೂಪಗಳನ್ನೇ ಬದಲಾಯಿಸಿದರು. ಹೋರಾಟಕ್ಕೆ ಹೊಸ ಹೊಸ ಮಾಗ೯ಗಳನ್ನು ಹುಡುಕಿದರು. ರಾಜ್ಯದ ರಾಜಕೀಯ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂದೆ `ನಗುವ ಚಳವಳಿ' ಮಾಡಿದರು. `ಉಗಿಯುವ ಚಳವಳಿ' ರೂಪಿಸಿದರು. `ಬಾರುಕೋಲು' ಚಳವಳಿ ಹುಟ್ಟು ಹಾಕಿದರು.
ಬೆದರಿಕೆಯಿಂದಲೋ ಮತ್ತ್ಯಾವ ಮಾಗ೯ದಿಂದಲೋ ಹಳ್ಳಿಗಳಿಗೆ ಹೋಗಿ ಸಾಲ ಮರುಪಾವತಿ ಮಾಡದೆ ರೈತರ ಮನೆಯ ಜಪ್ತಿ ಮಾಡಿ ಹೋಗುತ್ತಿದ್ದ ಅಧಿಕಾರಿಗಳು ಬೆಚ್ಚುವಂತೆ ಮರುಜಪ್ತಿ ಚಳವಳಿ ರೂಪಿಸಿದರು. ರೈತರಿಂದ ಜಪ್ತಿ ಮಾಡಿಕೊಂಡು ತಮ್ಮ ಕಚೇರಿಯಲ್ಲಿ ಸಾಮಾಗ್ರಿಗಳನ್ನು ಹೊಟ್ಟುತ್ತಿದ್ದನ್ನು ಮರು ಜಪ್ತಿ ಮೂಲಕ ವಾಪಾಸ್್ ತರುತ್ತಿದ್ದರು. ಪ್ರೊಫೆಸರ್್ ಪ್ರಕಾರ ಅನ್ನದಾತ ಎಂದೋ ಸಾಲಗಾರನ್ನಲ್ಲ. ಸಕಾ೯ರವೇ ಸಾಲಗಾರ.
ಪ್ರೊಫೆಸರ್್ ಅವರು ಯಾವತ್ತೂ ಕಕ್ಷೆಗೆ ನಿಲುಕುತ್ತಿರಲಿಲ್ಲ. ಅವರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅವರ ಮಾತಲ್ಲಿ ಸ್ಪಷ್ಟತೆ ಇತ್ತು. ಯೋಚನಾ ಕ್ರಮದಲ್ಲಿ ಕ್ಲಾರಿಟಿ ಇತ್ತು. ಯಾವುದಕ್ಕೂ ರಾಜಿಯಾಗದ ಪ್ರೊಫೆಸರ್್ ವಿರೋಧಿಗಳ ಪ್ರಕಾರ ಹಠಮಾರಿ. ಇದು ರೈತ ಸಂಘಕ್ಕೆ ಒಳಿತು ಆಯ್ತು ಅನಾನುಕೂಲವೂ ಆಯ್ತು. ರೈತ ಸಂಘ ಒಡೆಯಲು ಇವರ ಸಿಟ್ಟೂ ಕಾರಣವಾಯಿತು. ನಂಜುಂಡಸ್ವಾಮಿ ಅವರು ಬದುಕಿದ್ದಾಗ ಅಧಿಕಾರಿಗಳು ಒಂದಥ೯ದಲ್ಲಿ ಬೆಚ್ಚಿ ಬೀಳುತ್ತಿದ್ದರು. ಅಧಿಕಾರಿಗಳ ಮುಂದೆ ರೈತರು ಕೈ ಕಟ್ಟಿ ನಿಲ್ಲುವುದನ್ನು ತಪ್ಪಿಸಿದರು. ಅಧಿಕಾರಿಗಳು ನಿಮ್ಮ ಸೇವಕರು ಎಂದು ರೈತರಿಗೆ ತಿಳಿ ಹೇಳಿದರು. ಹೀಗಾಗಿಯೇ ಪ್ರೊಫೆಸರ್್ ರೈತರಿಗೆ ಹೊಸ ಭಾಷೆ ಹೇಳಿಕೊಟ್ಟರು. ಹೋರಾಟದ ಕಿಚ್ಚು ಹೊತ್ತಿಸಿದರು. ಸ್ವಾಭಿಮಾನ ಬೆಳೆಸಿದರು. ಕಿ.ರಂ. ನಾಗರಾಜ್್ ಹೇಳಿದಂತೆ ಪ್ರೊಫೆಸರ್್ ಶೂನ್ಯದಿಂದ ಸಾಗರವನ್ನು ಸೖಷ್ಟಿಸಿದ ಮಹಾನ್್ ಚೇತನ.